ನವದೆಹಲಿ, 27 ಅಕ್ಟೋಬರ್ (ಹಿ.ಸ):
ಆ್ಯಂಕರ್ : ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ 11 ಕ್ರೀಡಾಪಟುಗಳನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಿತಿ ಇಂದು ಶಿಫಾರಸು ಮಾಡಿದೆ.
ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಐತಿಹಾಸಿಕ ಚಿನ್ನದ ಪದಕವನ್ನು ಪಡೆದ ನೀರಜ್ ಚೋಪ್ರಾ, ಒಲಿಂಪಿಕ್ ನಲ್ಲಿ ಪದಕ ವಿಜೇತರಾದ ರವಿ ದಹಿಯಾ, ಪಿಆರ್ ಶ್ರೀಜೇಶ್ ಮತ್ತು ಲವ್ಲಿನಾ ಬೊರ್ಗೊಹೈ ಅವರನ್ನು ಸೇರಿದಂತೆ ಒಟ್ಟು 11 ಕ್ರೀಡಾಪಟುಗಳ ಹೆಸರುಗಳು ಪಟ್ಟಿಯಲ್ಲಿವೆ.
2021 ಭಾರತಕ್ಕೆ ವಿಶೇಷ ವರ್ಷವಾಗಿದೆ. ಹಲವಾರು ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ನಲ್ಲಿ ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಇನ್ನು ಇದರೊಂದಿಗೆ 35 ಭಾರತೀಯ ಅಥ್ಲೀಟ್ಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿ ಘೋಷಣೆ ಮಾಡಲಾಗಿದೆ
ಈ ಮೊದಲು ಈ ಪ್ರಶಸ್ತಿಯನ್ನು ರಾಜೀವ್ ಗಾಂಧಿ ಖೇಲ್ ರತ್ನ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿತ್ತು
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಭಾರತದ ಹಾಕಿ ತಂಡ ಐತಿಹಾಸಿಕ ಪ್ರದರ್ಶನದ ತೋರಿದ್ದರಿಂದ ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನಿಟ್ಟು ಮರು ನಾಮಕರಣ ಮಾಡಿದ್ದನು ಇಲ್ಲಿ ಉಲ್ಲೇಖಿಸಬಹುದು.
ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ 11 ಭಾರತೀಯ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ :
ನೀರಜ್ ಚೋಪ್ರಾ (ಅಥ್ಲೆಟಿಕ್ಸ್)ರವಿ ದಹಿಯಾ (ಕುಸ್ತಿ)ಪಿಆರ್ ಶ್ರೀಜೇಶ್ (ಹಾಕಿ)ಲವ್ಲಿನಾ ಬೊರ್ಗೊಹೈ (ಬಾಕ್ಸಿಂಗ್)ಸುನಿಲ್ ಛೆಟ್ರಿ (ಫುಟ್ಬಾಲ್)ಮಿಥಾಲಿ ರಾಜ್ (ಮಹಿಳಾ ಕ್ರಿಕೆಟ್)ಪ್ರಮೋದ್ ಭಗತ್ (ಬ್ಯಾಡ್ಮಿಂಟನ್)ಸುಮಿತ್ ಆಂಟಿಲ್ (ಜಾವೆಲಿನ್)ಅವನಿ ಲೇಖರ (ಶೂಟಿಂಗ್)ಕೃಷ್ಣ ನಗರ (ಬ್ಯಾಡ್ಮಿಂಟನ್)ಎಂ ನರ್ವಾಲ್ (ಶೂಟಿಂಗ್).
ಹಿಂದೂಸ್ತಾನ್ ಸಮಾಚಾರ್