ರುದ್ರಪುರ, 19 ಜುಲೈ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದ ರುದ್ರಪುರದ ಮನೋಜ್ ಸರ್ಕಾರ್ ಕ್ರೀಡಾಂಗಣದಲ್ಲಿ ಇಂದು 'ಒಂದು ಲಕ್ಷ ಕೋಟಿ ಹೂಡಿಕೆ ಉತ್ಸವ' ಆಯೋಜನೆಯಾಗಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
2023 ಡಿಸೆಂಬರ್ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಫಲವಾಗಿ ರಾಜ್ಯದಲ್ಲಿ ಈಗಾಗಲೇ ಒಂದು ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಪ್ರಾರಂಭವಾಗಿದ್ದು, ಇದನ್ನು ಮುಂದುವರಿಸುವ ಪ್ರಯತ್ನವೇ ಇಂದಿನ ಉತ್ಸವವಾಗಿದೆ. ಇ ಕುರಿತು ಮುಖ್ಯಮಂತ್ರಿ ಧಾಮಿ ಎಕ್ಸನಲ್ಲಿ ಮಾಹಿತಿ ನೀಡಿದ್ದು ಈ ಹೂಡಿಕೆಗಳಿಂದ ಉದ್ಯೋಗಾವಕಾಶಗಳು ಹೆಚ್ಚಳವಾಗುತ್ತಿದ್ದು, ಉತ್ತರಾಖಂಡ ಕೈಗಾರಿಕೆಗಳಿಗಾಗಿ ಪ್ರಭಾವಿ ರಾಜ್ಯವಾಗಿ ಹೊರಹೊಮ್ಮುತ್ತಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa