
ವಿಜಯಪುರ, 14 ನವೆಂಬರ್ (ಹಿ.ಸ.)
ಆ್ಯಂಕರ್ : ದೇಶದಲ್ಲಿ ಕಾಂಗ್ರೆಸ್ ಮುಗಿದು ಹೋಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಬಿಹಾರ ಚುನಾವಣೆಯಲ್ಲಿ ಊಹಿಸದ ರೀತಿಯಲ್ಲಿ ಜನತೆ ಎನ್ಡಿಗೆ ಆಶೀರ್ವಾದ ಮಾಡಿದ್ದಾರೆ. ಇದು ಮೋದಿ ಅಭಿವೃದ್ಧಿ ಕೆಲಸದಿಂದ ಆಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಗಿದು ಹೋಗುತ್ತದೆ. ಕರ್ನಾಟಕದಲ್ಲೂ ಮುಂದಿನ ದಿನಗಳಲ್ಲಿ ಸೋಲು ಆಗುತ್ತದೆ.
ವೋಟ್ ಚೋರಿ ಬಗ್ಗೆ ಸಂಸದ ಜಿಗಜಿಣಗಿ ಕಿಡಿಕಾರಿದರು. ಯಾರು ವೋಟ್ ಚೋರಿ ಮಾಡಿದ್ದಾರೆ. ಯಾರು ವೋಟ್ ಚೋರಿ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ದೇಶದಲ್ಲಿ ಬಿಜೆಪಿ ಗಾಳಿ ಇದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande