
ಗದಗ, 12 ನವೆಂಬರ್ (ಹಿ.ಸ.)
ಆ್ಯಂಕರ್:
ಗದಗ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿಂದು ನಗರದ ಕೆ ಎಚ್ ಪಾಟೀಲ ಜಿಲ್ಲಾ ಕ್ರೀಡಾಂಗಣ ದಲ್ಲಿ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ 14 ಮತ್ತು 17 ವಯೋಮಿತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ, ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ,
ಮಾನಸಿಕ ಹಾಗೂ ದೈಹಿಕವಾಗಿ ಹೆಚ್ಚು ಚಟುವಟಿಕೆಯಿಂದ ಬಾಲ್ಯದ ಜೀವನ ಕೂಡಿರಬೇಕು. ಆಗ ಮಾತ್ರವೇ ಸದೃಢ ಹಾಗೂ ಆತ್ಮವಿಶ್ವಾಸ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಕ್ರೀಡಾ ಸೌಲಬ್ಯ ಜಿಲ್ಲೆಯಲ್ಲಿ ಉತ್ತಮವಾಗಿದೆ ಇವುಗಳನ್ನು ಬಳಸಿಕೊಂಡು ಕ್ರೀಡಾ ಸಾಧನೆ ಮಾಡಲು ಕರೆ ನೀಡಿದರು.
ಜಿಲ್ಲೆಯಲ್ಲಿ ಇರುವ ಕ್ರೀಡಾ ಸೌಲಬ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವದು ಸಹ ಉತ್ತಮ ನಡೆ. ಕ್ರೀಡೆಯಲ್ಲಿ ಸದಾ ಪಾಲ್ಗೊಳ್ಳಿ, ಸೋಲು ಗೆಲವು ಇದ್ದೇ ಇರುತ್ತದೆ. ಶಕ್ತಿ, ಶಿಸ್ತು, ಉತ್ಸಾಹ ಹಾಗೂ ಆತ್ಮ ವಿಶ್ವಾಸದ ಪ್ರತೀಕವಾಗಿರುವ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವುದೇ ಪ್ರಮುಖ ಎಂದರು.
ಕ್ರೀಡೆಯೆಂದರೆ ಕೇವಲ ಗೆಲುವು ಸೋಲಿನ ವ್ಯವಹಾರವಲ್ಲ. ಅದು ವ್ಯಕ್ತಿಯ ವಿಕಾಸದ ಪಾಠಶಾಲೆ, ಶಿಸ್ತಿನ ಪಾಠಪುಸ್ತಕ ಮತ್ತು ಸಹಕಾರದ ಪಠ್ಯ. ಅಥ್ಲೆಟಿಕ್ ಕ್ರೀಡೆಗಳು ನಮ್ಮ ದೈಹಿಕ ಸಾಮರ್ಥ್ಯ ಅಷ್ಟೇ ಅಲ್ಲ. ಮನೋಬಲ ಮತ್ತು ಧೈರ್ಯವನ್ನು ಪರೀಕ್ಷಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಇಂತಹ ಜಿಲ್ಲಾ ಮಟ್ಟದ ಸ್ಪರ್ಧೆಗಳು ನಮ್ಮ ಯುವ ಪ್ರತಿಭೆಗಳಿಗೆ ರಾಜ್ಯ, ರಾಷ್ಟ್ರ, ಅಂತರಾಷ್ಟೀಯ ವೇದಿಕೆಗಳತ್ತ ಹೆಜ್ಜೆ ಇಡುವ ದಿಕ್ಕು ತೋರಿಸುತ್ತವೆ. ಕ್ರೀಡಾಂಗಣದಲ್ಲಿ ಪಾದಾರ್ಪಣೆ ಮಾಡುವ ಪ್ರತಿಯೊಬ್ಬ ಕ್ರೀಡಾಪಟು ಗೆಲುವಿಗಿಂತ ಮಿಗಿಲಾಗಿ ಪ್ರಯತ್ನದ ಸಾರ್ಥಕತೆಯನ್ನು ಪ್ರದರ್ಶಿಸಲು ಬಂದಿದ್ದೇವೆ ಎಂದು ತಿಳಿದು ಕ್ರೀಡಾ ಸ್ಪೂರ್ತಿ ಮೆರೆಯಬೇಕು. ಗೆಲ್ಲುವುದು ಗೌರವ ಆದರೆ ಪಾಲ್ಗೊಳ್ಳುವುದು ಪ್ರೇರಣೆ ಎಂಬ ಮಾತು ತಾವೆಲ್ಲರೂ ಸಕ್ರಿಯವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ದೃಢಪಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್ ಎಸ್ ಬುರಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಈ ಜಿಲ್ಲಾ ಮಟ್ಟದ ಕ್ರೀಡಾಕೂಟವು ಎಲ್ಲರಲ್ಲಿ ಹೊಸ ಶಕ್ತಿ ಉತ್ಸಾಹ ಕ್ರೀಡಾ ಮನೋಭಾವ ತುಂಬಲಿ ಎಂಬ ಆಶಯದೊಂದಿಗೆ ಆಯೋಜಿಸಲಾಗಿದೆ. ಇಲ್ಲಿ ಪಾಲ್ಗೊಳ್ಳುವ ಎಲ್ಲ ವಿದ್ಯಾರ್ಥಿಗಳು ನಮ್ಮವರೇ . ಸೋಲು ಗೆಲುವುಗಳನ್ನು ಸಮವಾಗಿ ಸ್ವೀಕರಿಸಿ ಕ್ರೀಡಾ ಕೂಟಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೆಕು. ಜಿಲ್ಲೆಯ ಎಲ್ಲ ಕ್ರೀಡಾಪಟುಗಳಿಗೂ ಶುಭ ಹಾರೈಸಿದ ಅವರು ತೀರ್ಪುದಾರರು ಆಯೋಜಕರು ಸರಿಯಾಗಿ ತೀರ್ಪು ನೀಡುವ ಮೂಲಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ತಿಳಿಸಿದರು.
ಜಿಲ್ಲಾ ಕೆಡಿಪಿ ಸದಸ್ಯರಾದ ಎಸ್ ಎನ್ ಬಳ್ಳಾರಿ ಮಾತನಾಡಿ ಕ್ರೀಡಾಪಟುಗಳಿಗೆ ಪೂರಕವಾದ ವಾತಾವರಣ ಗದಗ ಜಿಲ್ಲೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ ಅವರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ ಹೆಚ್ಚಿನ ಸಾಧನೆ ಮಾಡಲಿ ಎಂಬುದು ಸಚಿವ ಎಚ್ ಕೆ ಪಾಟೀಲ ಅವರ ಆಶಯ ಆಗಿದೆ. ಹಾಕಿ ಕ್ರೀಡೆಯಲ್ಲಿ ಬೇನು ಬಾಟ ಅವರ ಆಟ ನೋಡಲು ಹಿಟ್ಲರ್ ಅವರು ಬರುತ್ತಿದ್ದರು ಎಂದರೆ ಅವರು ಆಟದ ಶೈಲಿಯಲ್ಲಿ ವಿಶಿಷ್ಠವಾದ ಪ್ರದರ್ಶನ ನೀಡುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೆಮನಿ, ಡಾ.ಬಸವರಾಜ ಬಳ್ಳಾರಿ, ಬಿ.ಎಫ್.ಪೂಜಾರ, ವಿ.ಎಂ.ಹಿರೇಮಠ, ವಿ.ಎಫ್.ಕಲಕಂಬಿ, ಎಂ.ಕೆ.ಲಮಾಣಿ, ರಾಜು ಚವ್ಹಾಣ, ಶರಣಪ್ಪ ನಾವಳ್ಳಿ, ಎಲ್.ಸಿ.ಚೌಕಿಮಠ, ಎಸ್.ಡಿ.ಮುಳಗುಂದ, ರವಿರಾಜ ಪವಾರ, ವಿ.ವಿ.ನಡುವಿನಮನಿ, ಆರ್.ವಿ.ಶೆಟ್ಟೆಪ್ಪನವರ, ಶಂಕರ ಹಡಗಲಿ, ಶಿವಕುಮಾರ ಕುರಿಯವರ, ಶರಣು ಗೋಗೇರಿ, ವಸಂತ ಮಡ್ಲೂರ, ಎನ್.ಆರ್.ನಿಡಗುಂದಿ, ಎಂ.ವಿ. ಪಾಟೀಲ, ಎಲ್.ಡಿ.ಪಾಟೀಲ, ಆರ್.ಎಸ್.ನರೇಗಲ್, ಎಲ್.ಬಿ.ಹುಡೇದ, ಎಸ್.ಕೆ, ಮಂಗಳಗುಡ್ಡ ಸೇರಿದಂತೆ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೆಕೆಪಿಪಿಜಿ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಎಂ ಎಸ್ ಕುಚಬಾಳ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಜೆ.ಬಿ. ಅಣ್ಣಿಗೇರಿ ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP