

ಬಳ್ಳಾರಿ, 12 ನವೆಂಬರ್ (ಹಿ.ಸ.)
ಆ್ಯಂಕರ್ :
ಮನೆ ಮನೆಗೂ ಭರತ್ - ಸಲಾಂ ಬಳ್ಳಾರಿ ಅಭಿಯಾನದ ಅಂಗವಾಗಿ ಶಾಸಕ ನಾರಾ ಭರತರೆಡ್ಡಿ ಅವರು ಬಳ್ಳಾರಿ ನಗರದ 13ನೇ ವಾರ್ಡಿನ ಮಿಲ್ಲರ್ಪೇಟೆ ಇನ್ನಿತರೆ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ, ಹುಟ್ಟು ಹಬ್ಬದ ಅಂಗವಾಗಿ ಮನೆ ಮನೆಗೂ ಕಿಚನ್ ಕಿಟ್ ಅನ್ನು ವಿತರಣೆ ಮಾಡಿದ್ದಾರೆ.
ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆಗೆ ಶಾಸಕರು ಚಾಲನೆ ನೀಡಿದರು.
ಸ್ಥಳೀಯ ಮುಖಂಡರಾದ ಥಿಯೇಟರ್ ಶಿವು, ರಾಕಿ, ಕಪ್ಪೆ ಶಿವು, ತಬ್ರೇಜ್, ಕವಿತಾ, ಕೀರ್ತಿಕುಮಾರ್, ಮಾಜಿ ಮೇಯರ್ ಎಂ. ರಾಜೇಶ್ವರಿ ಸುಬ್ಬರಾಯಿಡು, ಪಾಲಿಕೆಯ ಸದಸ್ಯರಾದ ಮಿಂಚು ಶ್ರೀನಿವಾಸ, ನೂರ್ ಮೊಹಮ್ಮದ್, ಪಿ. ಗಾದೆಪ್ಪ, ಜಬ್ಬಾರ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಮುಖಂಡರಾದ ಚಾನಾಳ್ ಶೇಖರ್, ಗೌತಮ್ ಮತ್ತಿತರರು ಹಾಜರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್